Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬನ್ನಿಮಂಟಪದಲ್ಲಿ ದಸರಾ ಸಂಭ್ರಮ: ಅಂಬು ಕಡಿದು ಉತ್ಸವಕ್ಕೆ ತೆರೆ ಎಳೆದ ಭಕ್ತರು

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮದೇವರುಗಳಾದ ಶ್ರೀವೀರಭದ್ರಸ್ವಾಮಿ, ಚಳ್ಳಕೆರೆಯಮ್ಮ ಮತ್ತು ಉಡಲಸಮ್ಮ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವ ವಿಜೃಂಭಣೆಯಿಂದ ಸಂಪನ್ನವಾಯಿತು.


ಬನ್ನಿಮಂಟಪಕ್ಕೆ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ, ಶ್ರೀಚಳ್ಳಕೆರೆಯಮ್ಮ, ಶ್ರೀಉಡಸಲಮ್ಮ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಗ್ರಾಮದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಬನ್ನಿಮಂಟಪಕ್ಕೆ ಆಗಮಿಸಿ ಮೂರು ದೇವರುಗಳ ಸಮಾಗಮವನ್ನು ವೀಕ್ಷಿಸಿ ಸಂತಸ ಪಟ್ಟರಲ್ಲದೆ, ಅಂಬುಕತ್ತರಿಸುವ ಕಾರ್ಯದಲ್ಲಿ ಪಾಲ್ಗೊಂಡರು.

ಕಳೆದ ಒಂಭತ್ತು ದಿನಗಳಿಂದ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜಾಪುನಸ್ಕಾರಗಳು ಯಶಸ್ವಿಯಾಗಿ ನಡೆದಿದ್ದು,

ಗುರುವಾರ ಸಂಜೆ ಸುಮಾರು ೫.೩೩ರ ಸಮಯದಲ್ಲಿ ಬಳ್ಳಾರಿ ರಸ್ತೆಯ ಬನ್ನಿಮಂಟಪದ ಮೈದಾನದಲ್ಲಿ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ, ಶ್ರೀಚಳ್ಳಕೆರೆಯಮ್ಮ, ಶ್ರೀಉಡಸಲಮ್ಮ ದೇವರುಗಳ ಸಮ್ಮುಖದಲ್ಲಿ ಪುರಂತಪ್ಪನ ವೀರನಾಟ್ಯದೊಂದಿಗೆ ಅಂಬು ಕತ್ತರಿಸುವ ಮೂಲಕ ವೈಭವದ ದಸರಾಕ್ಕೆ ತೆರೆ ಎಳೆಯಲಾಯಿತು. ಸಹಸ್ರಾರು ಭಕ್ತಾಧಿಗಳ ಜೈಯಕಾರ ಹಾಕಿದರು.

ಪ್ರತಿವರ್ಷದಂತೆ ಈ ವರ್ಷವೂ ಬನ್ನಿಮಂಟಪದ ಸುತ್ತ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ನವರಾತ್ರಿ ಉತ್ಸವಕ್ಕೆ ಚೈತನ್ಯತುಂಬಿದರು. ಪದ್ದತಿಯಂತೆ ಭವ್ಯವಾದ ಮೆರವಣಿಗೆಯಲ್ಲಿ ಮೊದಲು ಬಸವಣ್ಣ, ಪುರಂತಪ್ಪ, ಚಳ್ಳಕೆರೆಯಮ್ಮ, ಉಡಸಲಮ್ಮ, ವೀರಭದ್ರಸ್ವಾಮಿ ದೇವರಗಳು ಭಕ್ತರ ಜೈಯಕಾರದೊಂದಿಗೆ ಸಾಗಿದವು. ದಾರಿಯುದ್ದಕ್ಕೂ ಜನರು ದೇವರ ದರ್ಶನ ಪಡೆದು ಕೈಮುಗಿದು ಪ್ರಾರ್ಥಿಸಿದರು.

ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿ, ಸದಸ್ಯರಾದ ಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಟಿ.ಪ್ರಭುದೇವ್, ಡಾ.ಎಸ್.ಡಿ.ಲೋಕೇಶ್, ಕೆ.ಎಂ.ಕೋಟ್ರೇಶ್, ಶಿವಕುಮಾರ್, ಕೆ.ಎಂ.ಅರವಿಂದ್, ತರಕಾರಿಮಂಜಣ್ಣ, ಡಿ.ಎಂ.ತಿಪ್ಪೇಸ್ವಾಮಿ, ಪೂಜಾರಾದ ಶಿವಕುಮಾರಸ್ವಾಮಿ, ವೀರೇಶ್, ರುದ್ರೇಶ್ ಮುಂತಾದವರು ಭಾಗವಹಿಸಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ