Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೀ಼ ಕನ್ನಡ ವಾಹಿನಿಯಲ್ಲಿ ಇದೇ 14 ರಿಂದ ಮಹಾನಟಿ ಸೀಸನ್ 2

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಮಿಡಿ ಕಿಲಾಡಿಗಳು, ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್, ಭರ್ಜರಿ ಬ್ಯಾಚುಲರ್ಸ್, ಮಹಾನಟಿ ಸೀಸನ್ 1 ನಂತಹ ಹಿಟ್ ರಿಯಾಲಿಟಿ ಶೋಗಳ ಸರ್ದಾರ ಜೀ ಕನ್ನಡ ಈಗ ಮತ್ತೊಂದು ರಿಯಾಲಿಟಿ ಶೋ ನ ನಿಮ್ಮ ಮಡಿಲಿಗೆ ಇಡಲು ಸಜ್ಜಾಗಿದೆ. ಮಹಾನಟಿ ಸೀಸನ್ 1 ನ ಅತೀ ದೊಡ್ಡ ಸಕ್ಸಸ್ ನಂತರ ಈಗ ಮಹಾನಟಿ ಸೀಸನ್ 2 ನಿಮ್ಮನ್ನು ಮನರಂಜಿಸಲು ಬರ್ತಿದೆ ಇದೆ ಜೂನ್ 14 ರಿಂದ ಸಂಜೆ 7:30ಕ್ಕೆ.


2024 ನಲ್ಲಿ ನಡೆದ ಮಹಾನಟಿ ಸೀಸನ್ 1 ಜನಮನ ಗೆದ್ದಿದ್ದು ಆ ಆವೃತ್ತಿಯ ವಿಜೇತೆ ಸ್ಯಾಂಡಲವುಡ್ ನ ಹಿಟ್ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕನಟಿ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಸ್ಪರ್ಧಿಗಳು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿ ಇದ್ದಾರೆ. ಇನ್ನು ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಭಾಗವಹಿಸಲಿದ್ದಾರೆ.

ಇನ್ನು 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ತರಬೇತಿ ಸಿಗಲಿದೆ. ಇನ್ನು ಈ 18 ವಾರಗಳಲ್ಲಿ ವಿಭಿನ್ನ ರೀತಿಯ ರೌಂಡ್ಸ್ ನಡೆಯಲಿದ್ದು ಯಾರು ಹೇಗೆ ನಟಿಸುತ್ತಾರೆ, ಯಾರು ತೀರ್ಪುಗಾರರ ಮನಗೆಲ್ಲಲಿದ್ದಾರೆ ಎಂದು ಕಾದು ನೋಡ್ಬೇಕಿದೆ.


ಮಹಾನಟಿ ಸೀಸನ್ 2 ನಲ್ಲಿ  ಚೆಂದುಳ್ಳಿ ಚೆಲುವೆ ನಿಶ್ವಿಕಾ ನಾಯ್ಡು, ಎವರ್ಗ್ರೀನ್ ನಟಿ ಪ್ರೇಮಾ ಮತ್ತು ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ಕೊಡುತ್ತಿರುವಂತಹ ತರುಣ್ ಸುಧೀರ್ ಅವರು ತೀರ್ಪುಗಾರರಾಗಿ ತೀರ್ಪನ್ನು ನೀಡಲಿದ್ದಾರೆ.

 ಕನ್ನಡ ಹೆಸರಾಂತ ನಟ ರಮೇಶ್ ಅರವಿಂದ್ ಅವರು ಈ ಶೋ ನ ಮಾಸ್ಟರ್ ಮೈಂಡ್ ಆಗಿದ್ದು ಸ್ಪರ್ಧಿಗಳಿಗೆ ಮಾಸ್ಟರ್ ಕ್ಲಾಸ್ ಗಳ ಜೊತೆಗೆ ಚಿತ್ರರಂಗದಲ್ಲಿ ತಮಗಿರುವ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇನ್ನು ಕನ್ನಡಿಗರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರು ನಿರೂಪಣಾ ಜವಾಬ್ದಾರಿ ಹೊತ್ತಿದ್ದಾರೆ.

ನಟಿಯಾಗಬೇಕೆಂದು ಕನಸುಗಳನ್ನು ಹೊತ್ತುಕೊಂಡಿರುವ ಸ್ಪರ್ಧಿಗಳಿಗೆ ಮಹಾನಟಿ ವೇದಿಕೆ ಒಂದು ಒಳ್ಳೆಯ ಅವಕಾಶ ಕೊಡುತ್ತದೆ ಎಂಬುದಕ್ಕೆ ಕಳೆದ ಸೀಸನ್ ನ ಯಶಸ್ಸೇ ಸಾಕ್ಷಿ. ಸ್ಪರ್ಧಿಗಳು ಯಾರ್ಯಾರು? ಹೇಗಿರಲಿದೆ ಮಹಾನಟಿ ಸೀಸನ್ 2 ಇವೆಲ್ಲದಕ್ಕೂ ಉತ್ತರ ಸಿಗಲಿದೆ ಇದೆ ಜೂನ್ 14 ರಂದು ಸಂಜೆ 7:30 ಕ್ಕೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ