Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ರೈತರ ಕಣ್ಣೀರಿನ ಶಾಪ ಸರ್ಕಾರವನ್ನು ಸುಟ್ಟು ಭಸ್ಮ ಮಾಡುತ್ತದೆ'

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಬಿಡದಿ ಭಾಗದಲ್ಲಿ 'ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ (ಟೌನ್‌ಶಿಪ್)' ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜನತಾದಳ (ಜಾತ್ಯತೀತ) ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ರೈತ ವಿರೋಧಿ ಮತ್ತು ಸರ್ವಾಧಿಕಾರಿ ಧೋರಣೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.

​'ಹಸಿರು ಮಲೆನಾಡು' ಬರಡು ಭೂಮಿಯಲ್ಲ: ಬೆಂಗಳೂರಿಗೆ ಪ್ರತಿ ತಿಂಗಳು ಭಾರಿ ಪ್ರಮಾಣದಲ್ಲಿ ಅಂದರೆ, 6 ಲಕ್ಷ ಲೀಟರ್ ಹಾಲು, ಲಕ್ಷಾಂತರ ತೆಂಗಿನಕಾಯಿ ಹಾಗೂ ತರಕಾರಿಯನ್ನು ಪೂರೈಸುವ ಬಿಡದಿ ಭಾಗವು ಬಿಲಾರಸ್ ಅಥವಾ ಬರಡು ಭೂಮಿಯಲ್ಲ, ಅದು 'ಹಸಿರು ಮಲೆನಾಡು' ಎಂದು ಜೆಡಿಎಸ್ ಬಣ್ಣಿಸಿದೆ.

​ಮಣ್ಣನ್ನು ಬಿಟ್ಟುಕೊಡಲ್ಲ ಎಂದ ರೈತರು: "100 ಕೋಟಿ ರೂಪಾಯಿ ಕೊಟ್ಟರೂ ನಮ್ಮ ಹೆತ್ತವರ ಸಮಾಧಿಗಳಿರುವ ಈ ಪವಿತ್ರ ಮಣ್ಣನ್ನು ನಾವು ಬಿಟ್ಟುಕೊಡುವುದಿಲ್ಲ" ಎಂದು ಸ್ಥಳೀಯ ರೈತರು ಪಟ್ಟು ಹಿಡಿದಿದ್ದಾರೆ ಎಂದು ಜೆಡಿಎಸ್ ಹೇಳಿದೆ.

​ಸರ್ಕಾರಕ್ಕೆ ನೇರ ಎಚ್ಚರಿಕೆ: "ರೈತರ ಕಣ್ಣೀರಿನ ಶಾಪ ಯಾವುದೇ ದಬ್ಬಾಳಿಕೆಯ ಸರ್ಕಾರವನ್ನು ಸುಟ್ಟು ಭಸ್ಮ ಮಾಡುತ್ತದೆ" ಎಂದು ಎಚ್ಚರಿಸಿರುವ ಪಕ್ಷವು, ಟೌನ್‌ಶಿಪ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

​ಜೆಡಿಎಸ್ ಸಂಪೂರ್ಣ ಬೆಂಬಲ: ʼರೈತರ ಮೇಲೇಕೆ ಗಧಾ ಪ್ರಹಾರ' ಎಂಬ ಅನ್ನದಾತನ ಆಕ್ರೋಶದ ನುಡಿಗಳಿಗೆ ರಾಜ್ಯ ಸರ್ಕಾರ ತಕ್ಷಣ ಉತ್ತರಿಸಬೇಕು ಎಂದು ಒತ್ತಾಯಿಸಿರುವ ಜೆಡಿಎಸ್, ರೈತರ ಫಲವತ್ತಾದ ಕೃಷಿಭೂಮಿ ಉಳಿಸುವ ಈ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿದೆ.

​ಬಿಡದಿ ಭಾಗದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ರೈತರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಜೆಡಿಎಸ್ ಪಕ್ಷವು ರೈತರ ಪರವಾಗಿ ನಿಂತು ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ್ಮದಿನಾಚರಣೆಗಳು ದುಂದು ವೆಚ್ಚದ ತೋರಿಕೆಯ ಆಚರಣೆಗಳಾಗಬಾರದು- ಚಂದ್ರಮೋಹನ್ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್. ಖರತ್ ರವರಿಗೆ ಡಿಜಿ-ಐಜಿಪಿ ಪದಕಕಂಠಪೂರ್ತಿ ಕುಡಿದು ರಸ್ತೆಯಲ್ಲಿ ದಾವಣಗೆರೆ ಯುವತಿ ಹೈಡ್ರಾಮಾ; ಪ್ರಶ್ನಿಸಿದ ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು ದರ್ಪ!ಸಚಿವ ಜಾರಕಿಹೊಳಿ ಬಾಮೈದನ ನಿವಾಸದ ಮೇಲೆ ಇಡಿ ದಾಳಿ; 13 ಕೋಟಿ ಆಸ್ತಿ, ನೂರಾರು ಬೇನಾಮಿ ಬಾರ್ ಲೈಸೆನ್ಸ್ ಪತ್ತೆ!ತ್ರಿವಳಿ ಕೊಲೆ: ಹಂತಕಿ ಶ್ವೇತಾ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪ್ರಿಯಕರ ಕೆನ್ನೆತ್ ಬಂಧನ!ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಜನರ ವಿರುದ್ಧ FIR ದಾಖಲಿಸಿದ SITಡಿಕೆಶಿ ಜೊತೆ ಯಾವುದೇ ವ್ಯವಹಾರವಿಲ್ಲ, ಹೊಂದಾಣಿಕೆಯೂ ಇಲ್ಲ; ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ!ಮೆಟ್ರೋ ಬಾಗಿಲು ಲಾಕ್ ಆಗದಿರಲು ತಾಂತ್ರಿಕ ದೋಷವಲ್ಲ, ಪ್ರಯಾಣಿಕರ ಸರ ಕಾರಣ! ಅಸಲಿ ಸತ್ಯ ಬಿಚ್ಚಿಟ್ಟ ಬಿಎಂಆರ್‌ಸಿಎಲ್ನಟಿ ಕೃಷಿ ತಾಪಂಡ ಫ್ಲ್ಯಾಟ್‌ಬೆಡ್‌ರೂಮ್‌ನಲ್ಲಿ ಗೆಳೆಯ ಆತ್ಮಹತ್ಯೆ; ಪೊಲೀಸರ ಮುಂದೆ ನಟಿ ಬಿಚ್ಚಿಟ್ಟ ಸತ್ಯ ಇಲ್ಲಿದೆ!ಪ್ರದೀಪ್ ಈಶ್ವರ್‌ಆರೋಪಕ್ಕೆ ಕೈಯಲ್ಲಿದ್ದ HMT ವಾಚ್ ತೋರಿಸಿ ಕುಮಾರಸ್ವಾಮಿ ಟಾಂಗ್!